Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ರೇಣುಕಾಸ್ವಾಮಿ ಕೊಲೆ ಕೇಸ್‌: ತಾಯಿ ರತ್ನಪ್ರಭಾರನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸಲು ಕೋರಿದ್ದ ಅರ್ಜಿ ವಜಾ! ನಟ ದರ್ಶನ್‌ಗೆ ಪ್ಲಸ್ ಪಾಯಿಂಟ್‌!

    1 hour ago

    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ  ರೇಣುಕಾಸ್ವಾಮಿ ತಾಯಿ  ರತ್ನಪ್ರಭಾರನ್ನು  ಹೋಸ್ಟೇಲ್‌  ವಿಟ್ನೇಸ್ ( ಪ್ರತಿಕೂಲ ಸಾಕ್ಷಿ) ಎಂದು ಪರಿಗಣಿಸುವಂತೆ  ಪ್ರಾಸಿಕ್ಯೂಷನ್ ಪರ ವಕೀಲ ಎಸ್‌ಪಿಪಿ ಪ್ರಸನ್ನ ಕುಮಾರ್  ಮಾಡಿದ್ದ ಮನವಿಯನ್ನು ಬೆಂಗಳೂರಿನ  57ನೇ ಸೆಷನ್ಸ್  ಕೋರ್ಟ್ ಇಂದು  ತಿರಸ್ಕರಿಸಿದೆ. ರೇಣುಕಾಸ್ವಾಮಿ ತಾಯಿ  ರತ್ನಪ್ರಭಾ ನೀಡಿದ್ದ ಹೇಳಿಕೆಯಲ್ಲಿ ಗೊಂದಲ  ಇದ್ದ ಹಿನ್ನಲೆಯಲ್ಲಿ  ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ರತ್ನಪ್ರಭಾ ಸಾಕ್ಷಿ ಹೇಳಿದ್ದನ್ನು ಪ್ರತಿಕೂಲ ಸಾಕ್ಷಿ ಎಂದು  ಪರಿಗಣಿಸುವಂತೆ  ಕೋರ್ಟ್ ಗೆ ಮನವಿ ಮಾಡಿದ್ದರು. ಆದರೇ,  ಪ್ರಾಸಿಕ್ಯೂಷನ್ ಮಾಡಿದ್ದ ಈ  ಮನವಿಯನ್ನು ಕೋರ್ಟ್ ಇಂದು  ತಿರಸ್ಕರಿಸಿದೆ. ಇದರಿಂದ ಪ್ರಾಸಿಕ್ಯೂಷನ್ ಹಾಗೂ ಪೊಲೀಸರಿಗೆ ಕೋರ್ಟ್ ನಲ್ಲಿ ಹಿನ್ನಡೆಯಾಗಿದೆ. ಕೋರ್ಟ್ ಈಗ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಹೇಳಿಕೆ, ಸಾಕ್ಷಿಯನ್ನು ಪರಿಗಣಿಸಲಿದೆ. ಆದರೇ, ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಅವರೇ ಆರೋಪಿಗಳಿಗೆ ಶಿಕ್ಷೆ ಆಗುವಂತೆ ಸರಿಯಾಗಿ ಸಾಕ್ಷಿ ಹೇಳಿಲ್ಲ. ತಾವು ಈ ಹಿಂದೆ ಪೊಲೀಸರಿಗೆ ನೀಡಿದ್ದ ಹೇಳಿಕೆಗೆ ವ್ಯತಿರಿಕ್ತವಾಗಿ ಕೋರ್ಟ್ ನಲ್ಲಿ ಸಾಕ್ಷಿ ಹೇಳಿದ್ದಾರೆ. ಹೀಗಾಗಿ ಪ್ರಾಸಿಕ್ಯೂಷನ್ ಪರ ವಕೀಲರು ಆಲರ್ಟ್ ಆಗಿದ್ದು, ರತ್ನಪ್ರಭಾರ ಸಾಕ್ಷ್ಯವನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸಲು ಕೋರ್ಟ್ ಗೆ ಮನವಿ ಮಾಡಿದ್ದರು. ರತ್ನಪ್ರಭಾ ಅವರು ಪ್ರಾಸಿಕ್ಯೂಷನ್ ಪರ ಸಾಕ್ಷಿಯಾಗಿದ್ದರು. ಆದರೇ, ಪ್ರಾಸಿಕ್ಯೂಷನ್ ಪರವಾಗಿ ಸರಿಯಾಗಿ  ರತ್ನಪ್ರಭಾ ಸಾಕ್ಷಿ ಹೇಳಿಲ್ಲ!.  ಹೀಗಾಗಿ ರೇಣುಕಾಸ್ವಾಮಿ ಕೊಲೆ ಕೇಸ್ ನ ಕೋರ್ಟ್ ವಿಚಾರಣೆಯೂ ಈಗ ಕುತೂಹಲಕ್ಕೆ ಕಾರಣವಾಗಿದೆ.   ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಅವರ ಹೇಳಿಕೆಯು,  ಆರೋಪಿಗಳಾದ ನಟ ದರ್ಶನ್, ನಟಿ ಪವಿತ್ರಾಗೌಡ ಹಾಗೂ ಉಳಿದ ಆರೋಪಿಗಳಿಗೆ ಅನುಕೂಲವಾಗಲಿದೆ. ರತ್ನಪ್ರಭಾರಂತೆ ಉಳಿದ ಸಾಕ್ಷಿಗಳು, ಪ್ರತ್ಯಕ್ಷದರ್ಶಿಗಳು ಸರಿಯಾಗಿ ಕೋರ್ಟ್ ನಲ್ಲಿ ಸಾಕ್ಷಿ ಹೇಳದೇ  ಇದ್ದರೇ, ಕೇಸ್ ಬಿದ್ದು ಹೋಗಬಹುದು. ಆರೋಪಿಗಳು ಕೋರ್ಟ್ ನಿಂದ ಖುಲಾಸೆಯಾಗಲೂಬಹುದು. ನಟ ದರ್ಶನ್ ನಿರಪರಾಧಿ ಎಂದು ಕೋರ್ಟ್ ತೀರ್ಪು ನೀಡಬಹುದು ಎಂಬ ಚರ್ಚೆಗಳು ಈಗ ಬೆಂಗೂರಿನ ಸಿಟಿ ಸಿವಿಲ್ ಕೋರ್ಟ್ ಕಾರಿಡಾರ್ ನಲ್ಲಿ ವಕೀಲರ ಸಮೂಹದಲ್ಲೇ ನಡೆಯುತ್ತಿವೆ.  ಇನ್ನೂ 57ನೇ ಸೆಷನ್ಸ್ ಕೋರ್ಟ್ ಇಂದು ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ಪ್ರದೂಷ್ ಜಾಮೀನು ಅರ್ಜಿಯನ್ನು  ತಿರಸ್ಕರಿಸಿದೆ. ತಂದೆಯ ತಿಥಿ ಕಾರ್ಯದಲ್ಲಿ ಭಾಗಿಯಾಗಲು ಪ್ರದೂಷ್ ಜಾಮೀನು ಕೋರಿದ್ದ. ಆದರೇ, ಕೋರ್ಟ್ ಪ್ರದೂಷ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.  ಕೋರ್ಟ್ ಆದೇಶ ಕೊಟ್ಟರೂ, ಮನೆ ಊಟ ಕೊಡುತ್ತಿಲ್ಲ ಎಂದು ದೂರು ಪವಿತ್ರಾಗೌಡ ತಾಯಿಯಿಂದ‌ಲೂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಕೆಯಾಗಿದೆ.   ಪವಿತ್ರಾಗೌಡಗೆ ವಾರಕ್ಕೊಮ್ಮೆ ಮನೆ ಊಟ ನೀಡಲು ಕೋರ್ಟ್ ಅವಕಾಶ ನೀಡಿತ್ತು.  ಮನೆಯೂಟ ತೆಗೆದುಕೊಂಡು ಹೋದರೆ ಜೈಲು ಅಧಿಕಾರಿಗಳು ಪವಿತ್ರಾಗೌಡಗೆ ಮನೆ ಊಟ ನೀಡಲು  ಅವಕಾಶ ನೀಡುತ್ತಿಲ್ಲ.  ಕೋರ್ಟ್ ಆದೇಶವನ್ನು ಜೈಲು ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದು ಅಫಿಡವಿಟ್ ಸಲ್ಲಿಸಿದ್ದಾರೆ.  ಪವಿತ್ರಾಗೌಡ ತಾಯಿ ಭಾಗ್ಯಮ್ಮ ರಿಂದ  ಕೋರ್ಟ್ ಗೆ ಅಫಿಡವಿಟ್ ಸಲ್ಲಿಕೆಯಾಗಿದೆ.  ಪವಿತ್ರಾಗೌಡ, ಲಕ್ಷ್ಮಣ್, ನಾಗರಾಜ್ ಗೆ ವಾರಕ್ಕೊಮ್ಮೆ ಮನೆಯೂಟ ನೀಡಲು ಕೋರ್ಟ್ ಆದೇಶ ನೀಡಿತ್ತು.  ಆರೋಪಿಗಳಾದ ಲಕ್ಷ್ಮಣ್, ನಾಗರಾಜ್ ಪರ ವಕೀಲರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.  ಪವಿತ್ರಾಗೌಡ ತಾಯಿ ಭಾಗ್ಯಮ್ಮ ಅವರಿಂದ ಅಫಿಡವಿಟ್ ಸಲ್ಲಿಕೆಯಾಗಿದೆ. ಈ  ಅರ್ಜಿಗಳಲ್ಲಿ ಯಾರ ವಿರುದ್ಧ ಕ್ರಮ ಆಗಬೇಕು ಎಂದು ನಿರ್ದಿಷ್ಟ ವಾಗಿ ಉಲ್ಲೇಖಿಸುವಂತೆ ಕೋರ್ಟ್ ಸೂಚನೆ ನೀಡಿದೆ.  ತಿದ್ದುಪಡಿ ಮಾಡಿ ಸೋಮವಾರ ಅರ್ಜಿ ಸಲ್ಲಿಸಲು ಕೋರ್ಟ್ ಆರೋಪಿಗಳ ಪರ ವಕೀಲರಿಗೆ ಸೂಚಿಸಿದೆ.   ಸೋಮವಾರ ಅರ್ಜಿ ಸಲ್ಲಿಸಿ, ವಿಚಾರಣೆ ನಡೆಸೋಣ ಎಂದು 57ನೇ ಸೆಷನ್ಸ್ ಕೋರ್ಟ್ ಹೇಳಿದೆ.  ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
    Click here to Read More
    Previous Article
    ಮಹಿಳಾ ಅಧಿಕಾರಿಗೆ ಧಮ್ಕಿ, ಕೊಲೆ ಬೆದರಿಕೆ: ಮೊನ್ನೆ ಶಿಡ್ಲಘಟ್ಟ, ಇಂದು ಮೈಸೂರು ವರಣಾ..!
    Next Article
    ರಾಮನ ಹೆಸರಲ್ಲಿ ರಾಜಕೀಯ ಬೇಡ,ಆಯನೂರು ಮಂಜುನಾಥ್​ ಹೀಗಂದಿದ್ಯಾಕೆ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment