Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮೈಕ್ರೋಫೈನಾನ್ಸ್ ಮತ್ತು ಖಾಸಗಿ ಬ್ಯಾಂಕಿಂಗ್ ಸಂಸ್ಥೆಗಳು’ಸಾರ್ವಜನಿಕರ ಹಿತಾಸಕ್ತಿಗೆ ಆದ್ಯತೆ ನೀಡಿ: ಎಸ್.ಪಿ. ಡಾ.ಶೇಖರ್‌ ಹೆಚ್.ಟಿ

    Source: Dinamana

    23 Jul 2026, 12:52 PM
    18 hours ago

    ದಾವಣಗೆರೆ,ಜುಲೈ.23  : ಹಣಕಾಸು ಸಂಸ್ಥೆಗಳಿಗೆ ಲಾಭ ಗಳಿಕೆ ಜೊತೆಗೆ  ಸಾರ್ವಜನಿಕರು ಮತ್ತು ಗ್ರಾಹಕರ ಹಿತಾಸಕ್ತಿ ಜೊತೆಗೆ ವಸೂಲಾತಿಯಲ್ಲಿ ನಿಯಮಗಳ ಪಾಲನೆ ಮುಖ್ಯವಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಶೇಖರ್‌ ಹೆಚ್.ಟಿ.ಅವರು  ಮೈಕ್ರೋಫೈನಾನ್ಸ್, ಖಾಸಗಿ ಬ್ಯಾಂಕಿಂಗ್ ಸಂಸ್ಥೆಯ ಮುಖ್ಯಸ್ಥರಿಗೆ ಸೂಚಿಸಿದರು. ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೈಕ್ರೋಫೈನಾನ್ಸ್ ಮತ್ತು ಖಾಸಗಿ ಬ್ಯಾಂಕಿಂಗ್ ಸಂಸ್ಥೆಗಳ ಮುಖ್ಯಸ್ಥರು / ಪದಾಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ  ಮಾತನಾಡಿದರು. ಸಾಲದ ಕರಾರು ಪತ್ರಗಳು, ನಿಯಮಗಳು, ಕೀ ಫ್ಯಾಕ್ಟ್ ಸ್ಟೇಟ್‌ಮೆಂಟ್  ಹಾಗೂ ಷರತ್ತುಗಳನ್ನು ಗ್ರಾಹಕರಿಗೆ ಅವರ ಪ್ರಾದೇಶಿಕ ಭಾಷೆಯಲ್ಲೇ (ಕನ್ನಡದಲ್ಲಿ) ಸ್ಪಷ್ಟವಾಗಿ ಓದಿ ಹೇಳಿ ತಿಳಿಸಬೇಕು. ಗ್ರಾಹಕರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಜಾಗೃತಿ ಮೂಡಿಸುವುದು ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದರು. ಸಾಲ ಮರುಪಾವತಿ ಮಾಡದ ಗ್ರಾಹಕರ ಮನೆ ಬಾಗಿಲಿಗೆ ತೆರಳಿ ಗಲಾಟೆ ಮಾಡುವುದು, ಬೆದರಿಕೆ ಹಾಕುವುದು ಅಥವಾ ಅಮಾನವೀಯವಾಗಿ ನಡೆದುಕೊಳ್ಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ವಸೂಲಾತಿ ಏಜೆಂಟರು  ತಮ್ಮ ಧೋರಣೆಯನ್ನು ಬದಲಾಯಿಸಿಕೊಂಡು ಕಾನೂನು ಚೌಕಟ್ಟಿನಲ್ಲಿ ಶಾಂತಿಯುತವಾಗಿ ವ್ಯವಹರಿಸಬೇಕು ಎಂದರು. ಹಲವು ಸಂಸ್ಥೆಗಳಲ್ಲಿ ಫೀಲ್ಡ್ ಆಫೀಸರ್‌ಗಳು ಮತ್ತು ಸಿಬ್ಬಂದಿಗಳು ಅರ್ಹತೆಯನ್ನು ತಪ್ಪಾಗಿ ಮೌಲ್ಯಮಾಪನ ಮಾಡುವುದು, ನಕಲಿ ದಾಖಲೆಗಳನ್ನು  ಪರಿಶೀಲಿಸದೇ ಸಾಲ ಮಂಜೂರು ಮಾಡುವುದು ಮತ್ತು ಅಕ್ರಮ ನಡೆಸುವುದು ಗಮನಕ್ಕೆ ಬಂದಿದೆ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಸಂಸ್ಥೆಗಳು ತಮ್ಮ ಸಿಬ್ಬಂದಿಯ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೊಂದಿರಬೇಕು ಎಂದು ತಿಳಿಸಿದರು. ಸಂಸ್ಥೆಯ ಎಲ್ಲಾ ಹಂತಗಳಲ್ಲೂ ಗ್ರಾಹಕರ ವಹಿವಾಟು ನಡೆಸುವಾಗ ಆರ್‌ಬಿಐ ಮಾರ್ಗದರ್ಶಿ ಸೂತ್ರಗಳನ್ನು ಚಾಚೂತಪ್ಪದೇ ಪಾಲಿಸಬೇಕು. ಹಠಾತ್ತಾಗಿ ಅಥವಾ ಏಕಪಕ್ಷೀಯವಾಗಿ ಯಾವುದೇ ಕ್ರಮ ಕೈಗೊಳ್ಳದೆ, ಮಾನವೀಯ ದೃಷ್ಟಿಕೋನದಿಂದ ಹಾಗೂ ನಿಯಮಾವಳಿಗಳ ಚೌಕಟ್ಟಿನಲ್ಲಿ ವ್ಯವಹರಿಸಬೇಕು. ಕೃಷಿಕರು ಅಥವಾ ಗ್ರಾಹಕರು ಮಳೆ ಅಭಾವ ಅಥವಾ ನೈಸರ್ಗಿಕ ಸಂಕಷ್ಟಗಳಿಂದ ಸಾಲ ಮರುಪಾವತಿಸಲು ಕಷ್ಟಪಡುತ್ತಿದ್ದರೆ, ಸಂಸ್ಥೆಯ ಆಡಳಿತ ಮಂಡಳಿಯ ಅನುಮೋದನೆ ಪಡೆದು ಸಾಲ ಮರುಪಾವತಿಯ ಅವಧಿಯನ್ನು ಪುನರ್‌ ರಚಿಸಲು (ಉದಾಹರಣೆಗೆ 40 ಕಂತುಗಳ ಬದಲಿಗೆ 60 ಕಂತುಗಳಾಗಿ ವಿಸ್ತರಿಸಲು) ಅವಕಾಶ ನೀಡಬೇಕು ಎಂದರು. ಗ್ರಾಹಕರ ಸಮಸ್ಯೆಗಳು ಮತ್ತು ದೂರುಗಳನ್ನು ಆಲಿಸಲು ಪ್ರತ್ಯೇಕ ‘ಕುಂದುಕೊರತೆ ನಿವಾರಣಾ ಅಧಿಕಾರಿ’ಯನ್ನು  ನೇಮಿಸಬೇಕು. ಈ ಅಧಿಕಾರಿಯ ಹೆಸರು, ಸಂಪರ್ಕ ಸಂಖ್ಯೆ ಮತ್ತು ಸಮಯದ ವಿವರಗಳನ್ನು ಶಾಖೆಯ ಆವರಣದಲ್ಲಿ ಸ್ಪಷ್ಟವಾಗಿ ಪ್ರದರ್ಶಿಸಬೇಕು. ಬೆಳಿಗ್ಗೆ 9 ಗಂಟೆಯ ಮೊದಲು ಮತ್ತು ಸಂಜೆ 7 ಗಂಟೆಯ ನಂತರ ಯಾವುದೇ ಕಾರಣಕ್ಕೂ ಗ್ರಾಹಕರಿಗೆ ಕರೆ ಮಾಡುವುದಾಗಲಿ ಅಥವಾ ಮನೆಗೆ ತೆರಳಿ ಕಿರುಕುಳ ನೀಡುವುದಾಗಲಿ ಮಾಡುವಂತಿಲ್ಲ ಎಂದು ಎಚ್ಚರಿಸಿದರು. ಗ್ರಾಹಕರಿಗೆ ಸಾಲ ನೀಡುವ ಮುನ್ನ ಅವರ ಮರುಪಾವತಿ ಸಾಮರ್ಥ್ಯ ಮತ್ತು ಸಿಬಿಲ್ ಸ್ಕೋರ್ ಅನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಸಾಮರ್ಥ್ಯಕ್ಕಿಂತ ಹೆಚ್ಚಿನ ಸಾಲ ನೀಡುವುದು ಅಥವಾ ಎರಡ ಕ್ಕಿಂತ  ಹೆಚ್ಚು ಸಂಸ್ಥೆಗಳಿಂದ ಸಾಲ ನೀಡುವುದನ್ನು ತಡೆಯಬೇಕು ಎಂದರು. ಮೈಕ್ರೋಫೈನಾನ್ಸ್ ಕ್ಷೇತ್ರದಲ್ಲಿ ಯಾವುದೇ ‘ಥರ್ಡ್ ಪಾರ್ಟಿ’ ಏಜೆಂಟ್‌ಗಳಿಗೆ ಆರ್‌ಬಿಐ ನಿಯಮಾವಳಿಗಳ ಪ್ರಕಾರ ಅವಕಾಶವಿಲ್ಲ. ಗ್ರಾಹಕರು ನೇರವಾಗಿ ಸಂಸ್ಥೆಯೊಂದಿಗೆ ವ್ಯವಹರಿಸಬೇಕು. ಸಿಬ್ಬಂದಿಗಳು ವಸೂಲಿ ಪ್ರಕ್ರಿಯೆಯಲ್ಲಿ ದುರ್ನಡತೆ ಅಥವಾ ಅಕ್ರಮ ಎಸಗಿದರೆ, ಸಂಸ್ಥೆಗಳೇ ನೇರವಾಗಿ ಅವರ ವಿರುದ್ಧ ಎಫ್‌ಐಆರ್  ದಾಖಲಿಸಿ ಕಾನೂನು ಕ್ರಮ ಜರುಗಿಸುತ್ತಿವೆ ಎಂದರು. ಪೊಲೀಸ್ ಇಲಾಖೆಯು ಶೀಘ್ರದಲ್ಲೇ ಎಲ್ಲಾ ಹಣಕಾಸು ಸಂಸ್ಥೆಗಳಿಗೆ ಅನುಸರಿಸಬೇಕಾದ ಹಾಗೂ ಮಾಡಬೇಕಾದ’ ಮತ್ತು ‘ಮಾಡಬಾರದ’ ಸ್ಪಷ್ಟ ನಿರ್ದೇಶನಗಳ ಪಟ್ಟಿಯನ್ನು ಕಳುಹಿಸಿಕೊಡಲಿದೆ ಎಂದರು. ಹಣಕಾಸು ಸಂಸ್ಥೆಗಳ ಪ್ರತಿನಿಧಿಯೊಬ್ಬರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ರೊಟ್ಟಿಯ ರುಚಿ……
    Next Article
    ಭೂಮಾಲೀಕರು, ರೈತರಿಗೆ ಸ್ಪಂದಿಸಿದ KPTCL: ವಿದ್ಯುತ್ ಮೂಲಸೌಕರ್ಯ ಯೋಜನೆಗೆ ಚಾಲನೆ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment