Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಬೆಂಗಳೂರು ಏರ್​​ಪೋರ್ಟ್​ನಲ್ಲಿ ‘ಬಸ್​ ಬೇ’ ವಿವಾದ.. ಇದರ ಅಸಲಿ ಕತೆ ಏನು?

    5 days ago

    ಬಸ್​ ಬೇ.. ಏರ್ಪೋರ್ಟ್ ಪ್ರಯಾಣಿಕರ ಪಾಲಿಗೆ ಅಚ್ಚುಮೆಚ್ಚಿನ ಸ್ಪಾಟ್​. ಆದ್ರೀಗ ಬಸ್ ಬೇಗಳ ಸಂಖ್ಯೆ ಇಳಿಕೆ ಮಡಾಲಾಗಿದೆ.  ಟರ್ಮಿನಲ್ 1ರಲ್ಲಿ 14 ಬಸ್ ಬೇಗಳಿತ್ತು.. ಆದ್ರೀಗ, 7ಕ್ಕೆ ಇಳಿಕೆ ಮಾಡಲಾಗಿದೆ ಏರ್​ಪೋರ್ಟ್​ ಆಡಳಿತ ಮಂಡಳಿಯ ಈ ನಡೆ ಆಕ್ಷೇಪಕ್ಕೆ ಕಾರಣ ಆಗಿದೆ. ಅಷ್ಟೇ ಅಲ್ಲ, ಖಾಸಗಿ ಟ್ಯಾಕ್ಸಿಗಳಿಗೆ ಅನುಕೂಲ ಮಾಡಲು ಬಸ್ ಬೇ ಇಳಿಕೆ ಮಾಡಿದ್ರಾ? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. 

    ಬಸ್​ ಬೇ.. ಏರ್ಪೋರ್ಟ್ ಪ್ರಯಾಣಿಕರಿಗೆ ಸುಲಭದ ಸಂಪರ್ಕ ಸಾಧನ ಆಗಿತ್ತು. ಆದ್ರೀಗ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ  ಬಸ್ ಬೇಗಳ ಸಂಖ್ಯೆ ಇಳಿಕೆ ಮಾಡಿದೆ. ಅಚ್ಚರಿ ಅಂದ್ರೆ ಟರ್ಮಿನಲ್ 1ರಲ್ಲಿ 14 ಬಸ್ ಬೇಗಳು ಈ ಮೊದಲು ಇತ್ತು... ಆದ್ರೀಗ, 7ಕ್ಕೆ ಇಳಿಕೆ ಮಾಡಲಾಗಿದೆ. 

    ಬಸ್ ಬೇ ಎಂದರೇನು?

    ವಿಮಾನ ನಿಲ್ದಾಣದ ಆಗಮನ,–ನಿರ್ಗಮನದ ವೇಳೆ ಟರ್ಮಿನಲ್ ಸಮೀಪದಲ್ಲಿರುವ, ಸರ್ಕಾರಿ ಹಾಗೂ ಖಾಸಗಿ ಬಸ್‌ಗಳು ನಿಲ್ಲುವ ನಿಗದಿತ ಜಾಗವೇ ಬಸ್ ಬೇ

    ಏರ್​ಪೋರ್ಟ್​ನಲ್ಲಿ ಈ ರೀತಿ ನಿರ್ಧಾರ ತೆಗೆದುಕೊಂಡಿರುವ ಬೆನ್ನಲ್ಲೇ ವ್ಯಪಾಕ ಟೀಕೆ ವ್ಯಕ್ತವಾಗಿದೆ. ಜೊತೆಗೆ ಖಾಸಗಿ ಟ್ಯಾಕ್ಸಿಗಳಿಗೆ ಅನುಕೂಲ ಮಾಡಲು ಬಸ್ ಬೇ ಇಳಿಕೆ ಮಾಡಿದ್ರಾ? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. 

    ಬಸ್​ ಬೇಗಳ ಸಂಖ್ಯೆ ಇಳಿಕೆ!

    • ಬಸ್ ಬೇಗಳ ಇಳಿಕೆಯಿಂದ ಬಿಎಂಟಿಸಿಗೆ ನಷ್ಟ ಆಗುವ ಸಾಧ್ಯತೆ 
    • ಬಸ್ ಬೇ ಇಳಿಕೆಯಿಂದ ವಾಯುವಜ್ರ ಬಸ್ ವಿಸ್ತರಣೆಗೆ ಅಡ್ಡಿ
    • ಏರ್​ಪೋರ್ಟ್​ನಿಂದ 156 ವಾಯುವಜ್ರ ಬಸ್‌ಗಳು ಸಂಚಾರ
    • ಅತ್ತಿಬೆಲೆ, ಜಿಗಣಿ ಸೇರಿದಂತೆ 65 ಕಿ.ಮೀ ವಾಯುವಜ್ರ ಸೇವೆ
    • ಒಂದು ಸಾಲು ಬಸ್​ ಬೇಗಾಗಿ, ಮತ್ತೊಂದು ಟ್ಯಾಕ್ಸಿಗಳಿಗೆ ಮೀಸಲು 
    • ಬಸ್‌ಗಳು ಬಂದ ತಕ್ಷಣವೇ ಹೊರಡುವ ಅನಿವಾರ್ಯತೆ ಇದೆ
    • ಇದರಿಂದ BMTCಗೆ ದಿನಕ್ಕೆ ₹3 ರಿಂದ 4 ಲಕ್ಷ ಆದಾಯ ನಷ್ಟ ಸಾಧ್ಯತೆ
    • ಪ್ರಯಾಣಿಕರು ಅನಿವಾರ್ಯವಾಗಿ ಟ್ಯಾಕ್ಸಿಗೆ ಹೋಗುವ ಪರಿಸ್ಥಿತಿ
    • ವಾಯುವಜ್ರದ ಗರಿಷ್ಠ ದರ ₹430 ಮಾತ್ರ ಟ್ಯಾಕ್ಸಿಗಿಂತ ಕಡಿಮೆ ವೆಚ್ಚ
    • ಏರ್ಪೋರ್ಟ್ ಪ್ರಯಾಣಿಕರಿಗೂ ಹೊರೆಯಾಗುವ ಸಾಧ್ಯತೆ 

    ಸದ್ಯ ಏರ್​ಪೋರ್ಟ್​ನ ಈ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಪ್ರಯಾಣಿಕರು ಬಸ್ ಮಿಸ್ ಮಾಡಿಕೊಂಡು ಬಲವಂತವಾಗಿ ಟ್ಯಾಕ್ಸಿಗೆ ಹೋಗುವ ಪರಿಸ್ಥಿತಿಗೆ ಅನುವುಮಾಡಿ ಕೊಡಬೇಡಿ ಅಂತಿದ್ದಾರೆ ಜನ. 

    ಇದನ್ನೂ ಓದಿ: ಮನೆ ಕಟ್ಟಲು ಅಗೆಯುತ್ತಿದ್ದಾಗ ಸಿಕ್ಕೇ ಬಿಡ್ತು ನಿಧಿ.. ಪ್ರಾಮಾಣಿಕತೆ ಮೆರೆದರೂ ಕುಟುಂಬಕ್ಕೆ ಎದುರಾಯ್ತು ಗಂಡಾಂತರ..!

    ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.  

    Click here to Read More
    Previous Article
    ಫಿನಾಲೆ ಹೊಸ್ತಿಲಲ್ಲಿ ಹೊರ ಬಂದ ರಾಶಿಕಾ ಶೆಟ್ಟಿ.. ಕಿಚ್ಚನ ಎದುರು ಹೇಳಿದ್ದೇನು..?
    Next Article
    Rashi Bhavishya: ಹಳೆಯ ಶತ್ರುಗಳ ಕಾಟ, ಕುಟುಂಬದಲ್ಲಿ ಸಣ್ಣಪುಟ್ಟ ಕಲಹ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment